Sunday, November 27, 2011

ಡಾಕ್ಟರ್ : ನೀವು ಯಾವ ಸೋಪ್ ಬಳಸುವುದು?

ಸಾಮ್ರಾಟ್ : ನಾನು ಗೋಪಾಲ್ ಸೋಪ್. ಹಲ್ಲುಜ್ಜಲು ಕೂಡ ಗೋಪಾಲ್ ಟೂತ್ ಪೇಸ್ಟ್, ಗೋಪಾಲ್ ಬ್ರಶ್!

ಡಾಕ್ಟರ್ : ಈ "ಗೋಪಾಲ್" ಅಂದ್ರೆ ಇಂಟರ್ನ್ಯಾಶನಲ್ ಕಂಪನಿನಾ?

ಸಾಮ್ರಾಟ್ : ಅಲ್ಲ ಅಲ್ಲ.. ಗೋಪಾಲ್ ನನ್ನ ರೂಮ್ ಮೇಟ್!

************

ಅವತ್ತು ಸಾಮ್ರಾಟರು ಫುಲ್ ಟೈಟ್...

ಇನ್ನು ನಡೆಯಲು ಆಗಲ್ಲ ಅನ್ನಿಸಲು ಶುರುವಾದಾಗ ಅಲ್ಲೇ ನಿಂತಿದ್ದ ಟ್ಯಾಕ್ಸಿ ಹತ್ತಿ ಕೂತು..." ಏರ್ ಪೋರ್ಟ್ ಗೆ ಹೊರಡಪ್ಪಾ.." ಅಂದರು.

ಟ್ಯಾಕ್ಸಿಯವನು "ಸ್ವಾಮೀ.. ನೀವು ಏರ್ ಪೋರ್ಟಿನಲ್ಲೇ ಇದೀರಿ!"
ಅಂದ.

ಸಾಮ್ರಾಟರು ಜೇಬಿನಿಂದ ಒಂದೈವತ್ತು ರೂಪಾಯಿ ತೆಗೆದು ಅವನಿಗಿತ್ತು,.." ತಗೋಳಪ್ಪಾ.. ಆದ್ರೆ ಇನ್ಮೇಲೆ ಇಷ್ಟ್ ಫಾಸ್ಟ್ ಆಗಿ ಕಾರ್ ಓಡಿಸ್ಬೇಡ!" ಅಂದರು.

******

ಸಾಮ್ರಾಟ್ ಮನೆಯಲ್ಲಿ ಅಂದು ಪ್ಲಗ್ ನಿಂದ ಹೊಗೆ ಬರ್ತಿತ್ತು.

ಸಿಟ್ಟು ತೀರಾ ನೆತ್ತಿಗೇರಿ ಕೆ.ಪಿ.ಟಿ.ಸಿ.ಎಲ್ ಗೆ ಫೋನ್ ಮಾಡಿ..."ಯಾರ್ರೀ ಅದು ಆಫೀಸಿನಲ್ಲಿ ಸಿಗರೇಟ್ ಸೇದಿ, ನಮ್ಮನೆ ಪ್ಲಗ್ ನಲ್ಲಿ ಬಿಡ್ತಾ ಇರೋದು?!" ಅಂತ ಬೈದರು!

*****

ಇದು ಸಾಮ್ರಾಟರು ಹೆಣ್ಣು ನೋಡಲು ಹೋದಾಗ ನಡೆದಿದ್ದು.

ಒಂದೇ ಲುಕ್ಕಿನಲ್ಲಿ ಸಾಮ್ರಾಟರ ಬದುಕನ್ನಿಡೀ ಅಳೆದ ಹುಡುಗಿಯ ಅಪ್ಪ, " ನನ್ನ ಮಗಳನ್ನು ಅವಳ ಬಾಳ ತುಂಬಾ ಒಬ್ಬ ಈಡಿಯಟ್ ಜತೆ ಇರಿಸಿಸೋದಕ್ಕೆ ನಂಗೆ ಇಷ್ಟ ಇಲ್ಲ!" ಅಂದುಬಿಟ್ಟರು.

ಸಾಮ್ರಾಟರು ಕೂಲ್ ಆಗಿ, " ಇದೇ ಕಾರಣಕ್ಕಾಗಿ ನಾನು ನಿಮ್ಮ ಮಗಳನ್ನು ಮದುವೆಗಾಗಿ ಕೇಳೋಕೆ ಬಂದಿರುವುದು!" ಎಂದರು.

*******

ಸಾಮ್ರಾಟರು ರಿಸೆಶನ್ ನಿಂದ ನರಳುತಿರುವಾಗಲೇ ಮಗ ಜಿಂಗ್ ಜಾಂಗ್ ಆಗಿ ಸಮಸ್ಯೆಯ ಪರಿತಾಪವೇ ಇಲ್ಲದೇ ಓಡಾಡುತ್ತಿದ್ದ. ಅದಾದರೆ ಹೋಗಲಿ, ವಯಸ್ಸು, ಆಡಿಕೊಳ್ಳಲಿ ಅಂತ ಸುಮ್ಮನಿರಬಹುದಿತ್ತು.
ಇಂಥಾ ಟೈಮಿನಲ್ಲಿ ಮಗ "ನಂಗೊಂದು ಬೈಕ್ ಕೊಡಿಸು" ಅಂತ ದುಂಬಾಲು ಬಿದ್ದ.

ಸಾಮ್ರಾಟರ ಪಿತ್ತ ನೆತ್ತಿಗೇರಿ, " ದೇವ್ರು ನಿಂಗೆ ೨ ಕಾಲ್ ಕೊಟ್ಟಿರೋದು ಯಾತಕ್ಕೆ?!" ಅಂತ ಕೇಳಿದರೆ ಮಗ "ಒಂದು ಗೇರ್ ಹಾಕೋಕೆ, ಮತ್ತೊಂದು ಬ್ರೇಕ್ ಹಾಕೋಕೆ!" ಅಂದುಬಿಡೋದೇ?!

ಒಮ್ಮೆ ಅವರ ಧರ್ಮಪತ್ನಿ ತವರಿಗೆ ಹೊರಟಾಗ ಅಡುಗೆಮನೆಯ ಉಸ್ತುವಾರಿಯನ್ನು ರಾ.ಶಿ.ಯವರಿಗೆ ನೀಡಲು ಅನುಮಾನಿಸುತ್ತಿದ್ದರು. ಆಗ ರಾ.ಶಿ.ಯವರು ಸಮಯಪ್ರಜ್ಞೆಯಿಂದ, " ನೀನೇನೂ ಯೋಚ್ನೆ ಮಾಡಬೇಡ. ನಾನೂ ಹೆಣ್ಣು ಮಕ್ಕಳೂ ಅಡುಗೆ ಮಾಡ್ಕೋತೀವಿ. ಕೂದಲು ಯಾವಾಗ ಹಾಕಬೇಕು ಅನ್ನೋದನ್ನ ಮಾತ್ರ ಹೇಳಿಬಿಟ್ಟು ಹೋಗು!" ಅಂತ ಹೇಳಿ ಮನೆಯವರೆಲ್ಲರಲ್ಲಿ ನಗೆಯುಕ್ಕಿಸಿದ್ದರು.

*******


ಇತ್ತೀಚೆಗೆ ಸಾಮ್ರಾಟರು ಅಮೇರಿಕೆಗೆ ಹೋಗಿದ್ದು ಎಲ್ಲರಿಗೂ ತಿಳಿದೇ ಇದೆ. ಇಲ್ಲಿ ಮನುಷ್ಯನ ತಲೆಯನ್ನೂ ಸೇರಿದಂತೆ ಒಂದನ್ನೂ ಬಿಡದೇ ತಿನ್ನುವವರಾದರೂ ಒಮ್ಮೆಯಾದರೂ ಅಮೇರಿಕನ್ ಕೋಳಿ ತಿನ್ನುವ ಚಪಲ, ಆಸೆ ಹೆಚ್ಚಾಯಿತು. ಹೋಟೆಲ್ ಗೇನೋ ಹೋದರು, ಆದರೆ ಕೋಳಿಗೆ ಇಂಗ್ಲೀಶ್ ನಲ್ಲಿ ಏನನ್ನುವರು ಅನ್ನೋದೇ ಮರೆತುಹೋಯಿತವರಿಗೆ. ಪೇಚಿಗಿಟ್ಟುಕೊಂಡಿದ್ದರೂ

ಕೊನೆಗೊಂದು ಐಡ್ಯಾ ಮಾಡ್ಯಾರು. ಅವರು ಹೇಳಿದ್ದು ಹೀಗಿದೆ:

"ಗಿವ್ ಮಿ ಎಗ್ಸ್ ಮದರ್!"

******

ಅವತ್ತು ಟ್ರೈನ್ ಒಂದು ಸ್ಟೇಷನ್ ನಲ್ಲಿ ನಿಲ್ಲುತ್ತದೆ.

ಸಾಮ್ರಾಟರು ಪಿಳಿಪಿಳಿ ಹೊರಗೆ ನೋಡುತ್ತಿದ್ದುದು ಬಿಟ್ಟರೆ ಏನೂ ಗೊತ್ತಾಗುತ್ತಿದ್ದಿಲ್ಲ. ಮೊದಲ ಬಾರಿಯ ಅಮೇರಿಕ ಪಯಣ ಅಲ್ಲವೇ. ಆದರೆ ಈ ವಿಷಯ ಪಕ್ಕದ ಪಯಣಿಗರಿಗೆ ಹ್ಯಾಗೆ ಗೊತ್ತಾಗಬೇಕು?

ಪಕ್ಕದಲ್ಲಿ ಕೂತ ಪುಣ್ಯಾತ್ಮ " ಇದು ಯಾವ ಸ್ಟೇಷನ್?" ಅಂತ ಕೇಳಿದ.

ಸ್ವಲ್ಪ ಹೊತ್ತು ಹೊರಗೆ ನೋಡಿ ಗಾಢವಾದ ಆಲೋಚನೆ ನಂತರ "ರೈಲ್ವೇ ಸ್ಟೇಷನ್!" ಅಂದರು.


ಮಾನ್ಯ ಬಿಲ್ ಗೇಟ್ಸ್,

ನಮ್ಮನೇಗೆ ಒಂದು ಕಂಪ್ಯೂಟರ್ ತಗೊಂಡಿದ್ದು, ಅದರಲ್ಲಿ ಕೆಲ ಸಮಸ್ಯೆಗಳು ಉದ್ಭವಿಸಿದೆ. ಅದನ್ನು ನಿಮಗೆ ತಿಳಿಸಲು ಬಯಸುತ್ತೇನೆ.

೧. ನಿಮ್ಮ ಕಂಪ್ಯೂಟರ್ ಚೆನ್ನಾಗಿದೆ, ಆದರೆ ಅದರಲ್ಲಿ "ಸ್ಟಾರ್ಟ್" ಬಟನ್ ಇದೆ, "ಸ್ಟಾಪ್" ಬಟನ್ ಇಲ್ವೇ ಇಲ್ಲ. ಇದರ ಕುರಿತು ವಿಚಾರ ಮಾಡುವಂತೆ ನಿಮ್ಮಲ್ಲಿ ವಿನಂತಿ.

೨.ನಿಮ್ಮಲ್ಲಿ "ರಿ-ಸ್ಕೂಟರ್" ಸಿಗುತ್ತದಾ? ಕಂಪ್ಯೂಟರ್ ನಲ್ಲಿ "ರಿ-ಸೈಕಲ್" ಅಂತಿದೆ. ನನ್ನ ಬಳಿ ಸ್ಕೂಟರ್ ಇದೆ, ಸೈಕಲ್ ಇಲ್ಲ!

೩. ನನ್ನ ಮಗ ಪಿಂಟೂ ಗೆ ಈಗ ೬ ವರ್ಷ. ಮೊದಲು ನಿಮ್ಮ "ಮೈಕ್ರೋ ಸಾಫ್ಟ್ ವರ್ಡ್" ನೋಡ್ತಿದ್ದ, ಈಗ ಆತ "ಮೈಕ್ರೋ ಸಾಫ್ಟ್ ಸೆಂಟೆನ್ಸ್" ಬೇಕನ್ನುತ್ತಿದ್ದಾನೆ. ದಯವಿಟ್ಟು ಕೊಡ್ತೀರಾ?

೪. ನಿಮ್ಮ ವಿಂಡೋವ್ಸ್ ನಲ್ಲಿ "ಮೈ ಪಿಕ್ಚರ್ಸ್" ಅನ್ನುವ ಫೋಲ್ಡರ್ ಇದೆ. ಆದರೆ ಅದರಲ್ಲಿ ನನ್ನ ಒಂದೂ ಫೋಟೋ ಇಲ್ಲದಿರುವುದು ಬೇಸರ ತಂದಿದೆ. ಇದರತ್ತ ಕೊಂಚ ಗಮನ ಹರಿಸಿ.

೫. ನಾನು ಕಂಪ್ಯೂಟರ್ ಕೊಂಡುಕೊಂಡಿದ್ದು ಮನೆಯಲ್ಲಿ ಬಳಸುವುದಕ್ಕೆ. ನಿಮ್ಮ ಸಾಫ್ಟ್ ವೇರ್ "ಮೈಕ್ರೋ ಸಾಫ್ಟ್ ಆಫೀಸ್" ಅಂತಿದೆ. "ಮೈಕ್ರೋ ಸಾಫ್ಟ್ ಹೋಂ" ನ್ನು ದಯವಿಟ್ಟು ನನಗೆ ನೀಡಿ.

ಹಾಗೆ ಕೊನೆಯದಾಗಿ ಒಂದು ಅನುಮಾನವಿದೆ ಸರ್. ನಿಮ್ಮ ಹೆಸರು "ಗೇಟ್ಸ್" ಆದರೂ ನೀವ್ಯಾಕೆ "ವಿಂಡೋವ್ಸ್"ನ ಮಾರುತ್ತಿದ್ದೀರಿ?

(ಈ-ಮೈಲ್ ಬ್ಯೂರೋ ಮೂಲದಿಂದ)

Thursday, March 18, 2010

hai


 

ಹುಡುಕಾಟ V/s ಹುಡುಗಾಟ


ಬಾಳಲ್ಲಿ
ಇರಬೇಕು
ಸ್ವಲ್ಪ
ಹುಡುಗಾಟ,
ಇಲ್ಲವಾದರೆ
ಬಾಳಿನ
ನೆಮ್ಮದಿ
ಗಾಗಿ
ದಿನವು
ಮಾಡಬೇಕು

...........................
ಹುಡುಕಾಟ



೨೦
೨೦
ಕ್ರಿಕೆಟ್


ಇದೋ
ಬಂದಿದೆ IPL ಆಟ

batsman
ಗಳ
ಹೊಡೆದಾಟ

bowler
ಗಳ
ಪರದಾಟ

chears
ಹುಡುಗಿರ
ಕುಣಿದಾಟ

BCCI
ಗೆ
ಹಣದ
ಹರಿದಾಟ

ಕೇಳುವವರಿಲ್ಲ
ಸೋತ
ತಂಡಗಳ
ಮಾಲೀಕರ
ಗೋಳಾಟ ............................


ದೋಸ್ತ್ ......

ಜೀವನ
ಎಂಬ
ಕ್ಯಾಮೆರಾದಲ್ಲಿ,

ಮನಸು
ಎಂಬ
ರೀಲು
ಹಾಕಿ,

ಸ್ನೇಹ
ಎಂಬ
ಬಟನ್
ಒತ್ತಿದಾಗ,


ನನ್ನ
ಹೃದಯದಲ್ಲಿ
ಮೂಡುವುದೆ
ನಿಮ್ಮ
ಭಾವಚಿತ್ರ. !!!

ಜಗವೆಲ್ಲ
ಮಲಗಿರಲು........

ಜಗವೆಲ್ಲ
ಮಲಗಿರಲು
ಅವನೊಬ್ಬನೆದ್ದ....
ಜಗವೆಲ್ಲ
ಮಲಗಿರಲು
ಅವನೊಬ್ಬನೆದ್ದ............
ಯಾಕಂದ್ರೆ
ಅವನು
ಕಾಲ್
ಸೆಂಟರ್
ನಲ್ಲಿ
ಕೆಲಸಕ್ಕಿದ್ದ.......

ಶಕುಂತಲೆ.............

ಬಹಳ
ದಿನಗಳ
ಬಳಿಕ
ಶಕುಂತಲೆಯ


ನೆನಪಾದ
ದುಶ್ಯಂತ
ಕಾಡಿಗೆ
ಹೋದ


 

ಅಲ್ಲೇ
ಆತ
ಬಿಟ್ಟು
ಹೋದಲ್ಲೆ
ಅದೇ


 

ಆಶ್ರಮದಂಗಳದಲ್ಲೆ
ಕುಳಿತಿದ್ದಳು
ಆಕೆ...


 

ಬಳಿಸಾರಿ
ಕಣ್ಣಲ್ಲಿ
ಕಣ್ಣಿಟ್ಟು
ನೋಡಹೊರಟನಾತ


 

ಆಕೆಯ
ಕಣ್ಣಲ್ಲಿ
ಅವನಿಗೆ
ಕಂಡಿದ್ದು


 

ಅವಳಲ್ಲ...


 

ಸತ್ತ
ಶಾಕುಂತಲೆ
ಮತ್ತು
ಶೂನ್ಯ

Tuesday, January 5, 2010

ಒಂದು ಮನವಿ.............

ಯಾವ ಕಣ್ಣು ನಿಮ್ಮನ್ನು
ನೋಡ ಬಯಸುವುದಿಲ್ಲವೋ …….
ಆ ಕಣ್ಣೀ ನತ್ತ ತಿರುಗಿಯೂ
ನೋಡಬೇಡಿ……..
ನಿಮ್ಮನೆ ಹುಡುಕುವ ಕಣ್ಣುಗಳಿಂದ
ಯಾವತ್ತೂ ಮರೆಯಾಗಬೇಡಿ ……
ಈ ದಿನ ನಿಮ್ಮ ಪುಟ್ಟ ಹೃದಯಕ್ಕೆ ಸಂತೋಷ ತರಲಿ

ಇಂತೀ ಪ್ರೀತಿಯ
ನಾಗೇಶ್

ಒಂದು ಪ್ರೀತಿಯಾ ಕಥೆ...........

ಹೌದು, ಅಂದೂ ಕೂಡ ಹೀಗೆ ಮಳೆ ಇತ್ತು. ಎಲ್ಲಾ ನೆನಪಿದೆ. ಅಂದೂ ಮೇ ತಿಂಗಳು. ಇದೇ ರೀತಿ ಸಂಜೆಗೆ ಮೊದಲೇ ಕತ್ತಲಾಗಿ, ಮೋಡಗಳು ಆಕಾಶವನ್ನೆಲ್ಲಾ ಆಚ್ಛಾದಿಸಿ ಮಳೆ ಯಾವಾಗಲಾದರೂ ಬರಬಹುದು ಎನ್ನುವ ಸಮಯದಲ್ಲೇ ಅವಳ ಕರೆ ಬಂದಿದ್ದು.

"ಕಾಲೇಜ್ ಬಳಿ ಇರೋ ಮೈದಾನಕ್ಕೆ ಬಾ. ಸ್ವಲ್ಪ ಮಾತಾಡೋದಿದೆ."

ನಾನು ಫೋನ್ ಹಿಡಿದುಕೊಂಡೇ ಕಿಟಕಿಯಿಂದ ಹೊರಗಿಣುಕಿ "ಮಳೆ ಬರೊ ಹಾಗಿದೆಯಲ್ಲೇ, ಸಂಜೆ ಸಿಕ್ಕಿದ್ರೆ ಆಗಲ್ವ" ಎಂದೆ.

"ಇಲ್ಲ, ಸ್ವಲ್ಪ ಅರ್ಜೇ೦ಟು, ಈಗಲೇ ಬಾ" ಎಂದಳು.

ಅವಳ ಮಾತುಗಳು ಎಂದಿನ ಹಾಗಿರಲಿಲ್ಲ. ಯಾವಾಗಲೂ ಮಾತಿನ ಕೊನೆಗೆ ಸೇರಿಸುತ್ತಿದ್ದ "ಕಣೊ" "ಬಾರೋ" "ಹೇಳೊ" ಗಳು ಇಂದು ಮಾಯವಾಗಿದ್ದನ್ನು ನಾನು ಗಮನಿಸದೆ ಇರಲಿಲ್ಲ. ಆದರೂ ಅವಳು ಕೆಲವೊಮ್ಮೆ ಚಿಕ್ಕ ವಿಷಯವನ್ನೂ ಗಂಭೀರವಾಗಿಸಿಕೊಂಡು ಹೀಗೆ ಮಾತಾಡುವುದು ಇದ್ದೇ ಇದೆ.

ನಾನು ಅಂಗಳಕ್ಕೆ ಹೋಗಿ ಇನ್ನೊಮ್ಮೆ ಆಗಸದತ್ತ ದೃಷ್ಟಿಸಿದೆ. ಇಂದು ಮತ್ತೆ ಮಳೆ ಬರುವುದು ಗ್ಯಾರೆಂಟಿ ಎಂದೆಣಿಸಿ ಉಲ್ಲಸಿತನಾದೆ. ಈಗ ಮೊರ್ನಾಲ್ಕು ದಿನಗಳಿಂದ ಸಂಜೆ ಮಳೆ ಬೀಳುತ್ತಿತ್ತು. ಅದೂ "ಹಳೆಮಳೆ" ಅಂದ್ರೆ ನನಗೆ ಇನ್ನೂ ಸಂತೋಷ. "ಭಾನುವಾರನೂ ಬಿಡೋದಿಲ್ಲ ಈ ಮಳೆ" ಅಂತ ಅಮ್ಮ ಬರಲಿರುವ ವರುಣನನ್ನು ಶಪಿಸಿದಳು. ಶಾರದಾಂಬ ದೇವಸ್ಥಾನದ ಭಜನೆ ಎಲ್ಲಿ ತಪ್ಪಿ ಹೋಗುವುದೋ ಎಂದು ಅಮ್ಮನಿಗೆ ಆತಂಕವಾಗಿತ್ತು. ಸರಸರನೆ ಪ್ಯಾಂಟ್ ಏರಿಸುತ್ತಿದ್ದ ನನ್ನನ್ನು ನೋಡಿದ ಅಮ್ಮ "ಈಗ ಎಲ್ಲಿಗೋ? ಆಕಾಶ ನೋಡು ಸಗಣಿ ಬಳಿದಂತೆ ಕಪ್ಪಾಗಿದೆ, ಮಳೆ ಬರುತ್ತೆ. ಎಲ್ಲಿಗೂ ಹೋಗಬೇಡ" ಅಂದರು. ಅಮ್ಮನಿಗೆ ಮಳೆಯ ಮೇಲಿನ ಹುಸಿ ಕೋಪ ಅವಳ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. "ಫ್ರೆಂಡ್ ಮನೆಗೆ, ಸ್ವಲ್ಪ ಹೊತ್ತಿನಲ್ಲೇ ಬಂದು ಬಿಡುತ್ತೇನೆ " ಎಂದು ಹೇಳಿ ಅಮ್ಮನ ಪ್ರತಿಕ್ರಿಯೆಗೂ ಕಾಯದೆ ಮನೆಯಿಂದ ಹೊರಬಿದ್ದೆ.

ಗಾಳಿ ಜೋರಾಗಿ ಬೀಸುತ್ತಲಿತ್ತು. ಗಾಳಿಯ ವೇಗಕ್ಕೆ ರಸ್ತೆಯ ಕಸ, ಧೂಳೆಲ್ಲ ಮಿಶ್ರಗೊಂಡು ಆಕಾಶದಲ್ಲಿ ಹಾರಾಡುತ್ತಿದ್ದವು. ಜನರೆಲ್ಲ ಮನೆ ಸೇರಿಕೊಳ್ಳುವ ತವಕದಲ್ಲಿದ್ದರು. "ಛೆ, ಇವತ್ತು ತಲೆ ಸ್ನಾನ ಮಾಡಿದ್ದೆ ದಂಡ" ಎಂದು ನನ್ನಷ್ಟಕ್ಕೆ ಅಂದುಕೊಂಡೆ. ಮಳೆ ಬರೋದ್ರೊಳಗೆ ಕಾಲೇಜ್ ತಲುಪಬೇಕೆಂದು ವೇಗವಾಗಿ ಹೆಜ್ಜೆ ಹಾಕತೊಡಗಿದೆ. ಹೆಚ್ಚೂ ಕಡಿಮೆ ಓಡಿದಂತೆ ನಡೆದು ಮೈದಾನಕ್ಕೆ ಹತ್ತಿರಗೊಂಡೆ. ಮೈದಾನದ ಇನ್ನೊಂದು ತುದಿಯಲ್ಲಿ ಭೂತಾಕಾರವಾಗಿ ಬೆಳೆದಿದ್ದ ಸಂಪಿಗೆ ಮರದ ಬುಡದಲ್ಲಿ ಅವಳು ನಿಂತಿದ್ದಳು. ಸಂಪಿಗೆ ಮರ ಗಾಳಿಗೆ ತೂರಾಡುತ್ತ ಇನ್ನಷ್ಟು ಭಯಾನಕವಾಗಿ ತೋರುತ್ತಿತ್ತು. ಇವಳಿಗೆ ಅರ್ಥನೇ ಆಗಲ್ಲ, ಗಾಳಿ ಈ ರೀತಿ ಬೀಸುತ್ತಿದೆ, ಮರದ ಕೆಳಗೆ ನಿಂತಿದ್ದಾಳೆ ಎಂದು ಗದರಿಸಲು ಸಜ್ಜಾಗುತ್ತಾ ಅವಳತ್ತ ಧಾವಿಸಿದೆ. "ಏನೇ ಇಷ್ಟೊತ್ತಲ್ಲಿ ಬರ ಹೇಳಿದೆ, ಅದೂ ಅರ್ಜೆ೦ಟ್ ಅಂಥ" ಎಂದಿನಂತೆ ಮಾತಾಡಿದೆ. ಉತ್ತರ ಬರಲಿಲ್ಲ. ಅವಳು ನೆಲವನ್ನೆ ದಿಟ್ಟಿಸುತ್ತಿದ್ದಳು. ಏನೋ ಹೇಳೊಕೆ ಹೊರಟವನು ಸಂಪಿಗೆ ಮರದ ಹೊಯ್ದಾಟದಿಂದ ಭಯಗೊಂಡು "ನಡಿ ಇಲ್ಲಿ ನಿಲ್ಲುವುದು ಬೇಡ, ಕಾಲೇಜ್ ಬಳಿ ಹೋಗೋಣ" ಎಂದೆ. ನಾವು ಮರೆಯಿಂದ ಹೊರ ಬಂದಿದ್ದೇ ತಡ, ನೆಲ್ಲಿಕಾಯಿ ಗಾತ್ರದ ಮಳೆ ಹನಿಗಳು ಒಂದೊಂದಾಗೆ ಭೂಮಿಯ ಕಡೆಗೆ ಶರವೇಗದಲ್ಲಿ ಬೀಳತೊಡಗಿದವು. "ಓಡು ಓಡು, ಈ ಮಳೆಗೆ ತಲೆ ಕೊಟ್ರೆ ತಲೇನೆ ತೂತಾಗೋ ಚಾನ್ಸ್ ಇದೆ" ಎನ್ನುತ್ತ ಕಾಲೇಜ್ ಕಡೆಗೆ ಓಡತೊಡಗಿದೆ. ಅವಳು ದುಪಟ್ಟ ತಲೆಗೇರಿಸಿಕೊಂಡು ನನ್ನನ್ನು ಹಿಂಬಾಲಿಸತೊಡಗಿದಳು. ಹಂಚಿನ ಮಾಡಿಯ ಮೇಲೆ ಬೀಳುತ್ತಿದ್ದ ಮಳೆ ಹನಿಗಳ ಶಬ್ದ ಕಲ್ಲುಗಳು ಬಿದ್ದಂತೆ ಭಾಸವಾಗುತ್ತಿತ್ತು.

"ಏನೊ ಹೇಳ್ಬೇಕು ಅಂದ್ಯಲ್ಲ, ಈಗ ಹೇಳು, ಏನಂಥ ಸೀರಿಯಸ್ ವಿಷಯ ?"
"........................................."
"ಏನು ಹೇಳ್ತಿಯೊ ಇಲ್ವೊ? "
"........................................ ಏನೂ ಇಲ್ಲ."
"ಅರೆ ಇದೊಳ್ಳೆ ಕಥೆ ಆಯ್ತಲ್ಲ. ಏನೂ ಇಲ್ದೆ ಮತ್ತೇಕೆ ಕರೆದೆ. ಅಕ್ಷಯ್ ಕುಮಾರ್-ರವೀನಾ ತರ ಮಳೇಲಿ ಡ್ಯೂಯೆಟ್ ಹಾಡ್ಬೇಕು ಅನ್ನಿಸ್ತೇನೆ?" ಅಣಕವಾಡಿದೆ.

ಮಳೆ ಜೋರಾಯಿತು. ಮೈದಾನದಲ್ಲೆಲ್ಲ ತಿಳಿ ಬಿಳಿಯ ಪರದೆಯನ್ನು ಬಿಟ್ಟಂತೆ ಕಂಡುಬಂತು. ನನ್ನ ಮೆಚ್ಚಿನ ಮಳೆಯನ್ನು ನೋಡುತ್ತ ಕ್ಷಣಾರ್ಧದಲ್ಲೆ ಜಗವನ್ನು ಮರೆತು ಮಳೆಯ ಪ್ರಲಾಪದಲ್ಲಿ ಲೀನಗೊಂಡೆ. ಮಳೆ ಒಂದೇ ಸಮನೆ ಹೆಚ್ಚಾಗತೊಡಗಿತು. ಗಾಳಿ ಮೊದಲಿನಷ್ಟು ಇರಲಿಲ್ಲ. ನೋಡನೋಡುತ್ತಿದ್ದಂತೆ ಚರಂಡಿಗಳೆಲ್ಲ ಕೆಂಪು ಮಿಶ್ರಿತ ನೀರಿನಿಂದ ತುಂಬಿ ಹೋದವು. ಮಳೆಯ ರೌದ್ರತೆಗೆ ನನ್ನನ್ನು ನಾನೆ ಕಳೆದುಕೊಂಡೆ. ಐದಾರು ನಿಮಿಷಗಳೆ ಕಳೆದಿರಬೇಕು.

"ಇಲ್ಲಿ ಕೇಳು...................................." ನಾನು ಮಳೆಯ ಮೋಡಿಯಿಂದ ಹೊರಬಂದೆ.
"ಕರೆದ್ಯಾ?........... ಏನೋ ಹೇಳ್ಬೇಕು ಅಂದೆ....." ಅವಳನ್ನು ನೆನಪಿಸಿದೆ.
"......................................." ಅವಳ ಮೌನ ಮತ್ತೆ ಮಳೆಯೆಡೆಗೆ ಗಮನ ಹರಿಸಲು ಅವಕಾಶ ಮಾಡಿಕೊಟ್ಟಿತು.
"ನನ್ನನ್ನು ಮರೆತುಬಿಡು......"
"ಏನು!!!!!.........." ಭ್ರಮಾಲೋಕದಿಂದ ಎಚ್ಚೆತ್ತವನಂತೆ ಪ್ರಶ್ನಿಸಿದೆ.
"ನನ್ನ ಬಳಿ ಸಮಯವಿಲ್ಲ. ಮನೇಲಿ ಸುಳ್ಳು ಹೇಳಿ ಬಂದಿದೀನಿ, ನನ್ನನ್ನು ಮರೆತುಬಿಡು. ನಮ್ಮ ಸಂಭಂದ ಇಲ್ಲಿಗೆ ನಿಲ್ಲಿಸೋಣ" ಅಳತೊಡಗಿದಳು.
"ಏನ್ ತಮಾಷೆ ಮಾಡ್ತೀಯಾ? " ಆತಂಕಗೊಂಡಿದ್ದೆ.
"..........................." ಮತ್ತೆ ಮೌನ. ಕಣ್ಣೀರು ಅವಳ ಕಪಾಲಗಳನ್ನು ತೋಯಿಸಿದ್ದವು.
"......... ಇನ್ನೆರಡು ದಿನಗಳಲ್ಲಿ ನನ್ನ ನಿಶ್ಚಿತಾರ್ಥ. ನನ್ನ ಮನೆಯವರನ್ನು ಎರುರಿಸಲು ನನ್ನಿಂದಾಗಲಿಲ್ಲ. ಕ್ಷಮಿಸಿಬಿಡು" ಬಿಕ್ಕತೊಡಗಿದಳು.
ನನಗೆ ಮಾತೇ ಹೊರಡಲಿಲ್ಲ. ತಲೆ ಸುತ್ತುವಂತೆನಿಸಿ ಗೋಡೆಯನ್ನು ಹಿಡಿದು ಕೂರಲೆತ್ನಿಸಿದೆ. ನನ್ನ ಪರಿಸ್ಥಿತಿಯನ್ನರಿತ ಅವಳು ಹತ್ತಿರ ಬಂದು ಕೈ ಹಿಡಿದುಕೊಂಡಳು.
"ಯಾಕೇ ಹೀಗ್ ಮಾಡ್ದೆ......" ತಡೆಯಲಾರದೆ ಕಣ್ಣೀರು ಜಿನುಗಿತು.
"ಕ್ಷಮಿಸಿಬಿಡೋ................." ಅಪರಾಧಿ ಮನೋಭಾವ ಅವಳಲ್ಲಿತ್ತು.
ನನ್ನ ಕಣ್ಣೀರು ಒರೆಸಿ, ತಾನೂ ಕಣ್ಣೀರು ಒರೆಸಿಕೊಂಡು "ನನಗಿಂತ ಒಳ್ಳೇ ಹುಡುಗಿ ಸಿಕ್ತಾಳೆ ಬಿಡು" ಎಂದು ಸಾಂತ್ವಾನಿಸಿದಳು.
ಸನಿಹ ಬಂದು ಹಣೆಯನ್ನೊಮ್ಮೆ ಚುಂಬಿಸಿ "ಈ ಪಾಪಿನ ಯಾವತ್ತೂ ನೆನಪಿಸಿಕೊಳ್ಳಬೇಡ" ಎಂದು ಹೇಳಿ ಛತ್ರಿ ಬಿಡಿಸಿ ಓಡತೊಡಗಿದಳು. ಮಳೆಗೆ ಇದಾವುದರ ಪರಿವೆಯೇ ಇರಲ್ಲಿಲ್ಲ. ಇಂತಹ ಎಷ್ಟು ಅಂತ್ಯಗಳನ್ನು ಕಂಡಿತ್ತೋ ಈ ಮಳೆ.

ಬಯಲು ದಾಟಿ ಮನೆ ಹಾದಿ ಹಿಡಿದಾಗ ಮಳೆ ತೃಪ್ತಿಗೊಂಡು ನಿಲ್ಲತೊಡಗಿತು. ಒಂದೂವರೆ ವರ್ಷದಿಂದ ಪ್ರೀತಿಯ ಮಳೆಗೈದು ಬೆಳೆಸಿದ್ದ ಸಂಭಂದವನ್ನು ಕೇವಲ ಹತ್ತು ಮಾತಾಡಿ, ನಿಮಿಷಗಳಲ್ಲೇ ಮರೆಯುವುದು, ಭಾವನೆಗಳನ್ನು ಬಟ್ಟೆ ಬದಲಿಸಿದಂತೆ ಬದಲಿಸುವುದು ಸಾಧ್ಯವೇ ಎನ್ನಿಸಿತು. ಕರ್ಚೀಫಿನಿಂದ ಹಿಡಿದು ಪೆನ್ನು, ಪುಸ್ತಕ, ತಿಂಡಿ, ಮನಸ್ಸು, ಭಾವನೆ, ಕನಸುಗಳವರೆಗೆ ಎಲ್ಲವನ್ನೂ ಹಂಚಿಕೊಂಡಿದ್ದ ನಾವು ಇನ್ನು ಮುಂದೆ ಯಾವುದೇ ಸಂಭಂದವಿಲ್ಲದೆ ಬಾಳುವುದನ್ನು ನನಗೆ ಚಿತ್ರಿಸಿಕೊಳ್ಳಲ್ಲೂ ಆಗಲಿಲ್ಲ. ಅವಳಲ್ಲಿ ಈ ಎಲ್ಲಾ ಪ್ರಶ್ನೆಗಳನ್ನೊ ಕೇಳಬೇಕೆಂದೆನಿಸಿ ಕರೆ ಮಾಡಿದೆ. ಆ ಕಡೆಯಿಂದ ಉತ್ತರ ಬರಲಿಲ್ಲ. ಅವಳೂ ಇಂಥದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಳೇನೊ. ಕೊನೆಗೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ದಿನಕಳೆದ ಹಾಗೆ ಎಲ್ಲವೂ ಭೂತಕಾಲವನ್ನು ಹೊಕ್ಕವು. ಕೆಲವೊಮ್ಮೆ ಇಷ್ಟು ಸುಲುಭವಾಗಿ ಸೋತೆನಲ್ಲ ಎಂದೆನಿಸುತ್ತದೆ. ನಿಜವಾಗಲೂ ಯಾವುದು ಸೋಲು, ಯಾವುದು ಗೆಲುವು ಅನ್ನೊದೆ ಗೊತ್ತಾಗದ ಸ್ಥಿತಿ ತಲುಪಿದ್ದೇನೆ.

ಮಳೆ ನೋಡುತ್ತ ಕಿಟಕಿಯ ಮುಂದೆ ನಿಂತಿದ್ದ ನನಗೆ ಮಳೆ ನಿಂತಿದ್ದು ಅರಿವಿಗೇ ಬರಲಿಲ್ಲ. ಮಳೆ ನಿಂತಿದೆ. ಆದರೆ ನೆಲವೆಲ್ಲಾ ಕೆಸರಾಗಿದೆ. ನನ್ನ ಮನಸೂ ಕೂಡ. ಕೆಸರು ಒಣಗಿ ಗಟ್ಟಿಯಾಗಲು ಇನ್ನೂ ಎರಡು ದಿನಗಳಾದರೂ ಬೇಕು, ಅದೂ ಮತ್ತೊಮ್ಮೆ ಮಳೆ ಬಾರದಿದ್ದರೆ.

( ಇದು ನನ್ನ ಅನುಭವ ಅಲ್ಲ ............................. ಇ ರೀತಿ ಯಾರಿಗೂ ಆಗುವುದು ಬೇಡ .......................)

Wednesday, December 2, 2009

ಹಲೋ ಸ್ನೇಹಿತರೆ................

ನನ್ನ ಹಳೆಯ ಬ್ಲಾಗ್ ನ ನಿಲ್ಲಿಸಿ ಈಗ ಹೊಸ ಬ್ಲಾಗ್ ಶುರು ಮಾಡ್ತಾ ಇದ್ದೀನಿ ನಿಮ್ಮ ಸಲಹೆ ಹಾಗು ಸಹಕಾರ ಹೀಗೆ ಮುಂದುವರೆಯಲಿ ನನ್ನ ಹಳೆಯ ಬ್ಲಾಗ್ ನ ವಿಳಾಸ http://nageshdreams.blogspot.com